Thursday, June 2, 2016

ಪಂಚ್ ಫಲಿತಾಂಶ - ಐದು ರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬಂದಿದೆ..

ಮೊದಲನೆಯದಾಗಿ, ದಕ್ಷಿಣ ಭಾರತದ ನಮ್ಮ ನೆರೆ ರಾಜ್ಯವಾದ ತಮಿಳುನಾಡಿನಲ್ಲಿ ಮತ್ತೊಮ್ಮೆ 'ಅಮ್ಮ' ನ ಕೂಗು ಎಲ್ಲ ಮತದಾರರ ಮನ ಮುಟ್ಟಿದಂತಿದೆ. ತಮಿಳುನಾಡಿನಲ್ಲಿ, ಎಐಎಡಿಮ್ ಕೆ ಯ, ಜಯಲಲಿತಾ "ಅಮ್ಮ" ಮತ್ತೆ ಜಯಭೇರಿ ಬಾರಿಸಿದ್ಧಾರೆ. ನೀರಿನಂತೆ ಹರಿಸಿದ ಉಚಿತ ಉಡುಗೊರೆಗಳಿಗೋಯೇನೋ ಗೊತ್ತಿಲ್ಲ !! ಈ ಹಿಂದೆ ನಡೆದ ಎಲ್ಲಾ ಘಟನೆಗಳನ್ನೂ ಮತದಾರ ಸಂಪೂರ್ಣವಾಗಿ ಮರೆತಂತಿದೆ.. ಏನೇ ಆದರೊ ಅಮ್ಮನ ರಾಜಕೀಯ ತಂತ್ರಗಾರಿಕೆಯನ್ನು ಗಮನಿಸಲೇಬೇಕು ಹಾಗೂ ಮೆಚ್ಚಲೇಬೇಕಾದ ವಿಷಯ. 142/232

ಎರಡನೆಯದಾಗಿ, ದಕ್ಷಿಣ ಭಾರತದ ನಮ್ಮ ಮತ್ತೊಂದು ನೆರೆ ರಾಜ್ಯವಾದ ಕೇರಳದಲ್ಲಿ ನಿರೀಕ್ಷಿತ ಪಲಿತಾಂಶವೆಂದು ಕೊಂಡರೂ, ಒಂದು ರೀತಿಯ ಆಶ್ಚರ್ಯವೂ ಹೌದು!! ಯಾಕೇಂ್ತೀರ ? ಕೇರಳದಲ್ಲಿ ಎಡ ಪ್ರಜಾಸತ್ತಾತ್ಮಕ ರಂಗವು (ಎಲ್‌.ಡಿ.ಎಫ್), ಆಡಳಿತಾರೂಢ ಸಂಯುಕ್ತ ಪ್ರಜಾಸತ್ತಾತ್ಮಕ ರಂಗವನ್ನು ಧೂಳೀಪಟ ಮಾಡುವಲ್ಲಿ ಭಾರಿ ಯಶಸ್ಸು ಸಾಧಿಸಿದೆ. ಅಲ್ಲದೆ, ಇದೇ ಮೊದಲ ಬಾರಿಗೆ ಬಿಜೆಪಿಯು ವಿಧಾನಸಭೆಗೆ ಪದಾರ್ಪಣೆ ಮಾಡುವ ಸುಯೋಗಕ್ಕೆ ಪಾತ್ರವಾಗಿದೆ. ಎಲ್.ಡಿ.ಎಫ್ ಪಕ್ಷವನ್ನು ಪ್ರತಿನಿದಿಸಿ ಚುನಾವಣಾ ಕಣಕ್ಕೆ ಇಳಿದ ವಿ. ಎಸ್. ಅಚ್ಚುತಾನಂದನ್ ಅವರ ವಯಸ್ಸೇನು ಕಮ್ಮಿ ಇಲ್ಲಾ ರೀ.. ಸರಿ ಸುಮಾರು 93 ವರ್ಷ ಅವರಿಗೆ. ಸಾಮಾನ್ಯವಾಗಿ ವಯಸ್ಸಾದವರಿಗೆ ಅಧಿಕಾರ ಕೊಟ್ಟರೆ ಈ ವಯಸ್ಸಿನಲ್ಲಿ ಏನು ತಾನೇ ಮಾಡಿಯಾರು ಅಥವಾ ಎಷ್ಟು ದಿನ ಮಾಡಿಯಾರು ಎಂಬ ಯೋಚನೆ ಯಾವುದೇ ಮತದಾರನಿಗೂ ಬಾರದೇಹೋಗದು. ಆದರೆ, ವಿ. ಎಸ್. ರವರ ಉತ್ಸಾಹ, ಜೀವನ ಶೈಲಿ, ಸಂಘಟನಾ ಶಕ್ತಿ, ಕಾರ್ಯತತ್ಪರತೆ, ಮುಂದಾಳತ್ವದ ಗುಣಗಳು ಇವೆಲ್ಲಾ ಪ್ರಾಯಶಃ ಮತದಾರ ಇವರ ವಯಸನ್ನು ಪಕ್ಕ ಕಿಟ್ಟು ಇವರಿಗೆ ಮತ ಹಾಕಿ ಈ ಭಾರೀ ಗೆಲ್ಲಿಸಿದ್ದಾರೆ. ತಿರುವನಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಜಿ ಕ್ರಿಕೆಟಿಗ ಶ್ರೀಶಾಂತ್ ಗೆ ಹೀನಾಯ ಸೋಲು. 91/140

ಮೂರನೆಯದಾಗಿ, ಪಶ್ಚಿಮ ಬಂಗಾಳ. ಇಲ್ಲಿ ಮತ್ತೋರ್ವಪ್ರತಿಭಾನ್ವಿತ ಮಹಿಳೆ ತೃಣಮೂಲ ಕಾಂಗ್ರೆಸ್ ನ ಮಮತಾ ಬ್ಯಾನೆರ್ಜೀ ಎದುರಾಳಿ ಪಕ್ಷಗಳನ್ನು ನಿಜವಾಗಿ ಗುಡಿಸಿ ಗುಂಡಾಂತರ ಮಾಡಿದ್ದಾರೆ ಅಂದ್ರೆ ತಪ್ಪಾಗಲಾರದು. ಇವರ ಮುಂದೆ ಎಡರಂಗ ಕಾಂಗ್ರೆಸ್ ಆಟ ನಡೆಯಲಿಲ್ಲ. ಬಿಜೆಪಿಯ ಆಟವೂ ಕೂಡ ಇವರ ಎದುರು ನಡೆಯಲಿಲ್ಲ. ಎರಡನೆಯ ಬಾರಿಗೆ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ. 217/294

ನಾಲ್ಕನೆಯಾದ್ದಾಗಿ, ನಮ್ಮ ಈಶಾನ್ಯ ಭಾಗಾದ ಅಸ್ಸಾಂ ರಾಜ್ಯ. ದೆಹಲಿ, ಬಿಹಾರದ ನಂತರ ಮೋದಿ ಮತ್ತು ಅಮಿತ್ ಶಾಗೆ ಒಂದು ರೀತಿಯ ರಿಲೀಫ್ ಅಂತಾನೆ ಹೇಳಬಹುದು. ಯಾಕಂದ್ರೆ, ಭಾರತದ ಈಶಾನ್ಯ ರಾಜ್ಯಗಳಲ್ಲಿ ನಮ್ಮ ಕೇಂದ್ರಾಡಳಿತ ರಾಷ್ಟ್ರೀಯ ಪಕ್ಷವಾದ ಬಿಜೆಪಿ ಗೆ ಎಲ್ಲೂ ಅಸ್ತಿತ್ವವೇ ಇಲ್ಲದಿದ್ದಂತ ಪರಿಸ್ತಿತಿಯಲ್ಲಿ ಇದು ಅವರಿಗೆ ಪ್ರಪ್ರಥಮ ಸ್ಪಷ್ಟ ಬಹುಮತದ ಗೆಲುವು ಹಾಗೂ ಮೊದಲ ಬಾರಿಗೆ ಬಿಜೆಪಿ ಅಧಿಕಾರ ಪಡೆಯುವುದು ಬಹುತೇಕ ಖಚಿತವಾಗಿದೆ. ಮೊದಲೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿ ಚುನಾವಣಾ ಕಾರ್ಯತಂತ್ರ ರೂಪಿಸಿ ಚುನಾವಣಾ ಕಣಕ್ಕಿಳಿದಿದ್ದರಿಂದ ಭಾರೀ ಬಹುಮತದೊಂದಿಗೆ ಬಿಜೆಪಿ ಗೆಲುವು ಸಾಧಿಸಿದೆ. ಸರ್ಬಾನಂದ ಸೋನಾವಾಲ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬರಲಿದ್ದಾರೆ. ಸುಮಾರು ಹದಿನೈದು ವರ್ಷಗಳ ಕಾಂಗ್ರೆಸ್ ಆಡಳಿತಕ್ಕೆ ಒಂದು ಮುಕ್ತಾಯ ಪರದೆ ಎಳೆದಂತಿದೆ. 'ಅಸ್ಸಾಂನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರುವುದು ಐತಿಹಾಸಿಕ ಜನಾದೇಶ'ವೆಂದು ಪ್ರಧಾನಿ ನರೇಂದ್ರ ಮೋದಿಯವರು ಈ ಯಶಸ್ಸಿಗೆ ಪ್ರತಿಕ್ರಿಯಿಸಿದ್ದಾರೆ. 88/126

ಕೊನೆಯದಾಗಿ, ಪುದುಚೇರಿಯಲ್ಲಿ ಅಷ್ಟೇನೂ ಪೈಪೋಟಿ ಇಲ್ಲದೆ ಇದ್ದರೂ ಕಣದಲ್ಲಿ ಗೆದ್ದವರು ಯಾರು ಎಂದು ಹೇಳಲು ಇನ್ನೂ ಕಾದು ನೋಡಬೇಕು. ಪುದುಚೆರಿಯಲ್ಲಿ ಮುಖ್ಯಮಂತ್ರಿ ಎಐಎನ್‌ಆರ್‌ಸಿ ಹಾಗೂ ಕಾಂಗ್ರೆಸ್ – ಡಿ.ಎಂ.ಕೆ. ಮೈತ್ರಿಕೂಟ ಒಟ್ಟು ಮೂವತ್ತು ಸ್ಥಾನಗಳಲ್ಲಿ ಸಮಬಲದ ಪ್ರದರ್ಶನ ನೀಡುತ್ತಿದ್ದು, ಅಂತಿಮವಾಗಿ ಜಯಮಾಲೆ ಯಾರ ಕೊರಳಿಗೆ ಎಂಬುದು ಇದೀಗ ಕುತೂಹಲದ ಪ್ರಶ್ನೆ. ಆದರೆ ಐದೂ ಪಕ್ಷಗಳ ಫಲಿತಾಂಶ ವನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಕಾಂಗ್ರೆಸ್ ಪಕ್ಷ. ಆತ್ಮಾವಲೋಕನ ಮಾಡ್ಕೊಳ್ತಾರೋ ಇಲ್ಲವೋ ಗೊತ್ತಿಲ್ಲ.. ಮಾಡ್ಕೊಂಡ್ರೆ ಅವ್ರ್ಗೇ ಒಳ್ಳೆದು.. ಇಲ್ಲಾಂದ್ರೆ ಬೇರೆ ಪಕ್ಷಗಳಿಗೆ ಒಳ್ಳೆದು.. ಅಷ್ಟೇ.. ಕಾಂಗ್ರೆಸ್ ನ್ ಈ ಹೀನಾಯ ಸೋಲು ಮುಂದೊಂದು ದಿನ ನಮ್ಮ ರಾಜ್ಯದ ಮೇಲೂ ಪರಿಣಾಮ ಬೀರಬಹುದು !! 17/30.
ಪ್ರೀತಿಯ ಸ್ನೇಹಿತರೇ, ಆತ್ಮೀಯ ಬಂಧುಗಳೇ, ಹಾಗೂ ವಾಟ್ಸ್ಆಪ್ ಪ್ರೇಮಿಗಳೇ...

ಇತ್ತೀಚೆಗೆ ನಾನು ಓದುತ್ತಿದ್ದ ಒಂದು ಮಾಧ್ಯಮ ಪುಸ್ತಕದ ಕೆಲವು ಆಯ್ದ ಸೂಕ್ಷ್ಮವಿಷಯಗಳ ಬಗ್ಗೆ ಇಲ್ಲಿ ಹಂಚಿಕೊಳ್ಳುತ್ತಾ ನನ್ನ ಅಭಿಪ್ರಾಯವನ್ನೂ ನಿಮ್ಮ ಮುಂದಿಡುತ್ತಿದ್ದೀನಿ...

ನಿಮೆಲ್ಲರಿಗೂ ತಿಳಿದಿರುವಂತೆ,
ನಮ್ಮ ದೇಶದಲ್ಲಿ, ರಾಜ್ಯದಲ್ಲಿ ಕಾಲ ಕಾಲಕ್ಕೆ ಸರಿಯಾಗಿ ಮಳೆ ಇಲ್ಲ. ಕುಡಿಯುವುದಕ್ಕೆ ಒಂದು ಹನಿ ನೀರು ಸಿಗುತಿಲ್ಲ. ಮಲಗಲು ಸೂರಿಲ್ಲ. ಆಟವಾಡಲು ಮೈದಾನಗಳಿಲ್ಲ. ನಡೆದಾಡಲು ಯೋಗ್ಯವಾದ ರಸ್ತೆಗಳಿಲ್ಲ. ಜನ ಬಯಸೋ ಅಂತ ಒಳ್ಳೆ ಆಡಳಿತವಿಲ್ಲ. ಬಡವರಿಗೆ ಬೆಲೆ ಇಲ್ಲ. ಭಾವನೆಗಳಿಗೆ ಅರ್ಥವಿಲ್ಲ. ರೈತರಿಗೆ ರಕ್ಷಣೆ ಇಲ್ಲ. ಓದು ಬರವಣಿಗೆಗೆ ಜಾಗವೇ ಇಲ್ಲ. ದ್ವೇಷದ ರಾಜಕಾರಣಕ್ಕೆ ಕೊನೆಯೇ ಇಲ್ಲ...ಈ ಪಟ್ಟಿಗೂ ಕೊನೆ ಇಲ್ಲ....

ನಾನೊಬ್ಬ ಹವ್ಯಾಸಿ ಪತ್ರಕರ್ತ ಹಾಗೂ ಛಾಯಾಗ್ರಾಹಕ..
"ಈ ಜಗತ್ತನ್ನು ಬದಲಿಸಬೇಕೆಂದು ನೀವು ಬಯಸಿದರೆ, ಅದಕ್ಕಿರುವ ತಾತ್ಕಾಲಿಕ ಆಯುಧವೆಂದರೆ ಪತ್ರಿಕೋದ್ಯಮವೆಂಬುದನ್ನು ನಾನು ಈಗಲೂ ನಂಬುತ್ತೇನೆ" ಎನ್ನುವ ಟಾಮ್ ಸ್ಟೊಪಾರ್ಡ್ನ, ಈ ಮಾತು ಮಾಧ್ಯಮದ ವಿರಾಟ್ ಶಕ್ತಿಗೆ ಹಾಗೂ ಅದರ ಮಿತಿಗೆ ಸಾಕ್ಷಿ.
ಹಾಗೂ ನನಗೆನಿಸುವ ಮಟ್ಟಿಗೆ ಏಕೈಕ ಸಾಧನೆಯ ಹಾದಿಯೂ ಹೌದು...

ಈ ನಿಟ್ಟಿನಲ್ಲಿ ಯೋಚಿಸುತ್ತಿರುವಾಗು ನನಗನಿಸಿದ್ದು "ನಾವು ಕಲಿತಿದ್ದೇನು, ಸಾಧಿಸಿದ್ದೇನು" ಎಂದು..
ನನಗೆ ಛಾಯಾಗ್ರಹಣದಷ್ಟೇ ಪ್ರಿಯವಾದ, ಮನಸ್ಸಿಗೆ ಹತ್ತಿರವಾದ ಹವ್ಯಾಸಗಳೆಂದರೆ ಪುಸ್ತಕಗಳನ್ನು ಓದುವುದು ಹಾಗೂ ಕ್ರಿಯಾಶೀಲ ಬರವಣಿಗೆ. ಒಬ್ಬನೇ ಕೂತು ಇದರ ಬಗ್ಗೆ ವಿಚಾರಮಾಡಿದಾಗ ನನಗನಿಸಿದ್ದು ಇವತ್ತಿನ ವಾಟ್ಸ್ಆಪ್, ಟ್ವಿಟರ್ ಗಳ ಮದ್ಯೆ ನನ್ನ ಓದು ಮತ್ತು ಬರವಣಿಗೆ ಕ್ಷೀಣಿಸುತ್ತಿದೆಯೇ ಎಂದು..

ಒಂದು ಬಾರಿ ಹಿಂತಿರುಗಿ ನೋಡಿದರೆ, ಅಯ್ಯೋ ಎಷ್ಟೋಂದು ಅಮೂಲ್ಯವಾದ ಸಮಯವನ್ನು ಹಾಳುಮಾಡಿದೆನಲ್ಲ ಎಂದು ಬೇಸರವಾಗುತ್ತದೆ. ಹಾಗೆಯೇ ತಾತ್ಕಾಲಿಕವಾಗಿ ಉಪಯುಕ್ತವೆನಿಸುವ ಈ ಎಲ್ಲಾ ಸೂಕಾಲ್ಡ್ ಸೋಶಿಯಲ್ ಮೀಡಿಯಾದ ಬಳಕೆಯಿಂದ ನಮ್ಮತನವನ್ನು ಬಿಟ್ಟು ಕೊಳ್ಳುತ್ತಾ, ಭಾವನೆಗಳೇ ಇಲ್ಲದೆ ಬದುಕುತ್ತಿದ್ದೀವೇನೋ ಎಂದೆನಿಸಲು ಶುರುವಾಗಿದೆ.
ಯಾರಾದರೂ ಮೆಸೇಜ್ ಕಳುಹಿಸಿದ್ದಾರೇನೋ, ತತ್‌ಕ್ಷಣ ಪ್ರತಿಕ್ರಯಿಸದಿದ್ದರೆ ಏನೋ ? ಉತ್ತರಿಸದಿದ್ದರೆ ಏನೆಂದು ಕೊಳ್ಳುತ್ತಾರೋ ? ಗೊತ್ತಲ್ಲ ಅಪಹಾಸ್ಯಗಳು, ಟೀಕೆ ಟಿಪ್ಪಣಿಗಳು ಇತ್ಯಾದಿ... ನಾವೇನೋ ಅದಕ್ಕೆ ಬದ್ದರಾಗಿದ್ದೆವೇನೋ ಎನ್ನುವ ರೀತಿ.. ನಮಗೆ ಅನುಕೂಲ ವಾಗುವಂತೆ, ಇಷ್ಟವಾದಂತೆ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಸ್ವಾತಂತ್ರವೇ ಇಲ್ಲದಂತಾಗಿದೆ. ಒಂದು ರೀತಿಯ ಕಟ್ಟುಪಾಡಾಗಿಬಿಟ್ಟಿದೆ.. ಸಂಬಂಧಗಳ ಬಗ್ಗೆ ಯೋಚಿಸಲೂ ಸಮಯವಿಲ್ಲದಂತಾಗಿದೆ.

ನಿಜವಾಗಿಯೂ ನಿಮ್ಮ ಮನಸಾಕ್ಷಿಯಾಗಿ ಹೇಳಿ.. ಒಂದು ನಿಮಿಷ ಮನಸ್ಸು ಪ್ರಶಾಂತವಾಗಿರಲು ಇವುಗಳೆಲ್ಲ ಒಂದು ರೀತಿಯ ತೊಡಕುಗಳು ಎಂದೆನಿಸುತ್ತದೆ. ಹೌದೋ ಅಲ್ಲವೋ !!

ಅವೆಲ್ಲಾ ಬಿಡಿ, ಸದ್ಯಕ್ಕೆ ನಾನು ಇವೆಲ್ಲದರಿಂದ ದೂರವಿರಬೇಕು ಎಂದು ಮನಸ್ಸು ಮಾಡಿದ್ದೀನಿ..
ವಾಟ್ಸಾಪ್ ಇಲ್ಲದೆ ಇದ್ದರೆ ಬೆಳಗಾಗುವುದೇ ಇಲ್ಲ, ಜೀವನವೇ ಇಲ್ಲ.. ನೀವ್ ಯಾವ ಕಾಲದಲ್ಲಿದ್ದೀರಾ ಸ್ವಾಮಿ.. ಅಂತ ಹೇಳುವವರು ನಮ್ಮ ಸುತ್ತಲೂ ದಿನಾ ನೋಡುತ್ತೀವಿ.. ನೋಡೇಬಿಡೋಣ ಒಂದು ಕೈಅಂತ ಸದ್ಯಕ್ಕೆ ವಾಟ್ಸಾಪ್ ನಿಂದ ದೂರಸರಿಯುತ್ತಿದೇನೆ.. ನನಗಿಷ್ಟವಾದ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಬೇಕೆಂದಿದ್ದೇನೆ..

ಯಾವತ್ತಿಗೂ ನಮನ್ನು ಕೈಹಿಡಿಯುವ ಪುಸ್ತಕಗಳು, ಬರಹಗಳು ಇವುಗಳ ಕಡೆಗೆ ನಿರಂತರವಾಗಿ ಸಮಯವನ್ನು ಮೀಸಲಿಡಲು ಯೋಚಿಸಿದ್ದೇನೆ ಮತ್ತು ಅದಕ್ಕೆ ಪೂರಕವಾಗಿ ನನ್ನ ಮನಸ್ಸು ಕೂಡ ಹಾತೊರೆಯುತ್ತಿದೆ...

ನಿಮೆಲ್ಲರ ದೂರವಾಣಿ, ಮೊಬೈಲ್ ನಂಬರ್ ಗಳು ನನ್ನ ಬಳಿ ಇಟ್ಟು ಕೊಂಡಿರುವೆ.. ಮಾತನಾಡ ಬೇಕೆಂದೆನಿಸಿದರೆ ಕರೆ ಮಾಡಿ ಮಾತನಾಡುವೆ..ನೀವೂ ಕರೆಮಾಡಿ ಮನಸಾರೆ ಮಾತನಾಡೋಣ...

ಇದು ಯಾರಿಗೂ ಕೈತೋರಿಸಿ ಮಾತಾಡುವ, ಟೀಕಿಸುವ ಉದ್ದೇಶವಂತೂ ಅಲ್ಲವೇ ಅಲ್ಲ, ಅದಕ್ಕೆ ನನಗೆ ಸಮಯವೂ ಇಲ್ಲ.. ನಿಮ್ಮ ನಿಮ್ಮ ಆಲೋಚನೆಗಳಿಗೆ, ಆದರ್ಶಗಳಿಗೆ, ಸ್ವಾತಂತ್ರಕ್ಕೆ ನಮ್ಮ ಅಡ್ಡಿಯೇನೂ ಇಲ್ಲ..ಅಥವಾ ನೀವಂದು ಕೊಂಡಂತೆ ನಾನು ಇವೆಲ್ಲದರ ವಿರೋಧಿಯೂ ಅಲ್ಲ !!

ಟೈಪ್ ಮಾಡಲು ಸಮಯ, ತಾಳ್ಮೆ ಎರಡೂ ಇದ್ದಾಗ ಇದೆ ಸಂದೇಶವನ್ನು ವಾಟ್ಸಾಪ್ ನಲ್ಲೂ ಕಳುಹಿಸುತ್ತೀನಿ...
ಒಂದನ್ನು ಪಡೆಯಬೇಕಾದರೆ, ಇನೊಂದನ್ನು ಕಳೆದುಕೊಳ್ಳಬೇಕಾಗುತ್ತದೆ ಎನ್ನುವಂತೆ...

ಇದು ಕೇವಲ ನಾನು ತೆಗೆದು ಕೊಂಡ ಒಂದು ಹೆಜ್ಜೆ ಅಷ್ಟೇ
ನನಗೆ ಹೇಳಬೇಕೆಂದನಿಸಿತು, ಅದಕ್ಕೆ ಇಷ್ಟೆಲ್ಲಾ ಹೇಳ್ದೆ...

ನಮಸ್ಕಾರ,
ರಾಘವೇಂದ್ರ ಪ್ರಸಾದ್. ಹೆಚ್. ಪಿ.
ಮೊಬೈಲ್: ೯೯ ೦೦ ೧೪೯೯೭೦